Slide
Slide
Slide
previous arrow
next arrow

ಬಿಯರ್ ಬಾಟಲಿಯಿಂದ ಹಲ್ಲೆ: ದೂರು ದಾಖಲು

300x250 AD

ಹೊನ್ನಾವರ : ಹೊನ್ನಾವರ ಬಸ್ ನಿಲ್ದಾಣದಿಂದ ರಿಕ್ಷಾ ಬಾಡಿಗೆ ಪಡೆದು, ಕೊಡಾಣಿಗೆ ಬಿಡಲು ಹೇಳಿ, ಕೊಡಾಣಿ ತಲುಪಿದ ಮೇಲೆ ಆಟೋ ಚಾಲಕ ಬಾಡಿಗೆ ಹಣ ಕೇಳಿದಕ್ಕೆ ಬೀಯರ್ ಬಾಟಲಿಯಿಂದ ಹೊಡೆದು ಗಾಯಗೊಳಿಸಿರುವ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಲೂಕಿನ ಕೊಡಾಣಿ ಗ್ರಾಮದ ವಿಲ್ಸನ್ ಡಿಸೋಜ ಎಂಬ ವ್ಯಕ್ತಿ ಪಟ್ಟಣದ ತುಳಸಿನಗರದ ನಿವಾಸಿ ಮಾದೇವ ರಾಮ ಮೇಸ್ತ ಇವರ ಆಟೋ ರಿಕ್ಷಾವನ್ನು ಹೊನ್ನಾವರ ಬಸ್ ತಂಗುದಾಣದಿಂದ ಬಾಡಿಗೆ ಮಾಡಿಕೊಂಡು ಕಾಸರಕೋಡಿಗೆ ಬಿಡುವಂತೆ, ಹೇಳಿ, ನಂತರ ಕೊಡಾಣಿ ತನಕ ಬಿಡಬೇಕು, ಅಲ್ಲಿ ನನ್ನ ಸಂಬಧಿಕರೋಬ್ಬರಿಗೆ ಆರೋಗ್ಯ ಸರಿ ಇಲ್ಲ ಎಂದು ಹೇಳಿ ಕೊಡಾಣಿ ತಲುಪಿದ ಮೇಲೆ ಬಾಡಿಗೆ ಹಣ ಕೇಳಿದಕ್ಕೆ, ಆಟೋ ಚಾಲಕನಿಗೆ ಹೊಡೆಯಲು ಹೋದಾಗ, ಆತ ಓಡಿಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಅಡ್ಡಗಟ್ಟಿ ಅಲ್ಲೇ ಬಿದ್ದಿರುವ ಬಿಯರ್ ಬಾಟಲಿಯಲ್ಲಿ ಮುಖಕ್ಕೆ, ತಲೆಗೆ ಹೊಡೆದು, ಕೈಯಿಂದ ಹೊಡೆದು, ಕಾಲಿನಿಂದ ಒದ್ದು ಗಾಯಗೊಳಿಸಿರುವ ಬಗ್ಗೆ ದೂರಿನಲ್ಲಿ ದಾಖಲಾಗಿದೆ.

ಹಲ್ಲೆಯಿಂದ ಗಾಯಗೊಂಡಿರುವ ವ್ಯಕ್ತಿ ಹೊನ್ನಾವರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಘಟನೆಗೆ ಸಂಬಂಧಪಟ್ಟಂತೆ ಗಾಯಗೊಂಡಿರುವ ವ್ಯಕ್ತಿಯ ಮಗ ಮಣಿಕಂಠ ಮಾದೇವ ಮೇಸ್ತ ತನ್ನ ತಂದೆಗೆ ಹಲ್ಲೆ ಮಾಡಿರುವ ವಿಲ್ಸನ್ ಡಿಸೋಜ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

300x250 AD

Share This
300x250 AD
300x250 AD
300x250 AD
Back to top